ಕನ್ನಡಿಗರಿಗೆ ಒಂದೇ ದಿನದ ಅಂತರದಲ್ಲಿ 2 ಆಘಾತ…. ನಿನ್ನೆ 29 ರಂದು ಅಶ್ವತ್ ನಿಧನದ ಸುದ್ದಿ… ಇಂದು 30ರಂದು ಬೆಳಗ್ಗೆ ಏಳ್ಬೇಕಾದ್ರೆ ಸಾಹಸಸಿಂಹ ಘರ್ಜನೆ ನಿಲ್ಲಿಸಿರುವ ವಾರ್ತೆ…. ಇಲ್ಲಿ ನನ್ನ ಒಂದು ಚಿಕ್ಕ ಚಿತ್ರ ನಮನ ಆ ದೊಡ್ಡ ಚೇತನಕ್ಕೆ…. ಈರ್ವರ ಆತ್ಮಕ್ಕೂ ಚಿರಶಾಂತಿ ಸಿಗಲಿ ಅನ್ನೋದೇ ನನ್ನ ಪುಟ್ಟ ಮತ್ತು ಪ್ರಾಮಾಣಿಕ ಪ್ರಾರ್ಥನೆ….
ಇನ್ನು ನಮ್ಮ ವಿಷ್ಣು ಸರ್ ಕೆಲ ಗೀತೆಗಳನ್ನ ಕೂಡಾ ಹಾಡಿದ್ದಾರೆ… ಅದ್ರಲ್ಲಿ ನನ್ನನ್ನ ತುಂಬಾ ಕಾಡೋ ಗೀತೆ ಅಂದ್ರೆ “ಜಿಮ್ಮಿಗಲ್ಲು” ಸಿನಿಮಾದ “ತುತ್ತು ಅನ್ನ ತಿನ್ನೋಕೆ”.. ಅವರಿಗೆ ಭಾವಪೂರ್ಣ ನಮನಕ್ಕಾಗಿ ಇಲ್ಲಿ ಆ ಗೀತೆನಾ ಕೂಡಾ ಕೊಟ್ಟಿದ್ದೀನಿ…
ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅoಗೈಯಗಲ ಜಾಗ ಸಾಕು ಹಾಯಾಗಿರೋಕೆ
ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
ಕಾಡ್ನಾಗೊoದು ಮರವೇ ಒಣಗಿ ಬಿದ್ರೆ ಏನಾಯ್ತು
ಊರ್ನಾಗೊoದು ಮನೆಯೇ ಉರಿದು ಹೋದ್ರೆ ಏನಾಯ್ತು
ಕಾಡ್ನಾಗೊoದು ಮರವೇ ಒಣಗಿ ಬಿದ್ರೆ ಏನಾಯ್ತು
ಊರ್ನಾಗೊoದು ಮನೆಯೇ ಉರಿದು ಹೋದ್ರೆ ಏನಾಯ್ತು
ಒಂದು ಅಲ್ಲೇ ನನ್ನ ಹೋಗು ಅಂದರೇನು
ಸ್ವರ್ಗದಂತಾ ಊರು ನನ್ನ ಹತ್ತಿರ ಕರೆದಾಯ್ತು
ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
ದುಡಿಯೋದಕ್ಕೆ ಮೈಯ್ಯಾ ತುಂಬಾ ಶಕ್ತಿ ತುಂಬೈತೆ
ಅಡ್ಡ ದಾರಿ ಹಿಡಿಯೋದ್ ತಪ್ಪು ಅಂಥ ಗೊತ್ತೈತೆ
ದುಡಿಯೋದಕ್ಕೆ ಮೈಯ್ಯಾ ತುಂಬಾ ಶಕ್ತಿ ತುಂಬೈತೆ
ಅಡ್ಡ ದಾರಿ ಹಿಡಿಯೋದ್ ತಪ್ಪು ಅಂಥ ಗೊತ್ತೈತೆ
ಕಷ್ಟಾ ಒಂದೇ ಬರದು ಸುಖವೂ ಬರದೇ ಇರದು
ರಾತ್ರೀ ಮುಗಿದಾ ಮೇಲೇ ಹಗಲು ಬಂದೇ ಬತ್ತೈತೆ
ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
ಹರಿಯೋ ನದಿಯು ಒಂದೇ ಕಡೆ ನಿಲ್ಲೊಕ್ಕಾಗಲ್ಲ
ಹುಟ್ಟಿದ ಮನುಷ ಒಂದೇ ಊರಲಿ ಬಾಳೋಕಾಗಲ್ಲ
ಹರಿಯೋ ನದಿಯು ಒಂದೇ ಕಡೆ ನಿಲ್ಲೊಕ್ಕಾಗಲ್ಲ
ಹುಟ್ಟಿದ ಮನುಷ ಒಂದೇ ಊರಲಿ ಬಾಳೋಕಾಗಲ್ಲ
ದೇವ್ರು ತಾನೇ ನಂಗೆ ಅಪ್ಪ ಅಮ್ಮ ಎಲ್ಲಾ
ಸಾಯೋ ತನಕಾ ನಂಬಿದವರ ಕೈ ಬಿಡಾಕಿಲ್ಲ
ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅoಗೈಯಗಲ ಜಾಗ ಸಾಕು ಹಾಯಾಗಿರೋಕೆ
ಹಾಯಾಗಿರೋಕೆ..ಹಾಯಾಗಿರೋಕೆ..
ಆ ಮಹಾನ್ ಚೇತನ ಎಲ್ಲಿದ್ದರೂ ಹಾಯಾಗೇ ಇರಲಿ ಅನ್ನೋದೇ ನಮ್ಮ ಅಭಿಲಾಷೆ… ಏನಂತೀರಾ???
ನಿಮ್ಮವ,
ಕೇಶವ ಪ್ರಸಾದ್ ಮಾರ್ಗ
ನಿಮ್ಮ ಅನಿಸಿಕೆಗಳು