ಸಿಹಿ ಮಾತು

ಇದು ಮನಸುಗಳ ಮಾತು

ಕೃಷ್ಣನ್ Love Story… ಸಿಕ್ಕಾಪಟ್ಟೆ ಫೀಲಿಂಗು ಮಗಾ….. ಜೂನ್ 27, 2010

ಸಕ್ಕತ್ ಫೀಲಿಂಗ್ ಮಗಾ!!!

ಶಶಾಂಕ್ ಇನ್ನೊಮ್ಮೆ ತಾವ್ಯಾಕೆ ನಿಜವಾದ ನಿರ್ದೇಶಕ ಅಂತ ತೋರ್ಸಿರೋ ಸಿನಿಮಾ ಅಂದ್ರೆ ಇದು… ಕೃಷ್ಣನ್ ಲವ್ ಸ್ಟೋರಿ…. ಮೊಗ್ಗಿನ ಮನಸ್ಸು ಕೇವಲ ಆಕಸ್ಮಿಕ ಅಲ್ಲ ಅನ್ನೋದನ್ನ ಇಲ್ಲಿ ಅವರು prove ಮಾಡಿದ್ದಾರೆ. ಫೀಲಿಂಗ್ ಇರೋರೆಲ್ಲಾ ಒಮ್ಮೇ ನೋಡ್ಳೇ ಬೇಕಾದ ಚಿತ್ರ ಇದು ಅಂತ ಹೇಳಿದ್ರೆ ಖಂಡಿತಾ ತಪ್ಪಾಗಲ್ಲ!!!!

ಕಥೆಯೇನೋ ಸಾಮಾನ್ಯವಾಗೇ ಇದೆ, ಕೆಳ ಮದ್ಯಮ ವರ್ಗದ ಜನರ ಭಾವನೆಗಳು ಮತ್ತು ತಾಕಲಾಟಗಳ ನಡುವೆ ಗಿರಕಿ ಹೊಡೆಯುತ್ತಾ ಇರತ್ತೆ, ಆದ್ರೆ ಅದನ್ನ 2.30 ತಾಸು ಶಶಾಂಕ್ ಕಟ್ಟಿಕೊಟ್ಟಿರೋ ರೀತಿ ಮಾತ್ರ ವಿಭಿನ್ನ. ಅದಕ್ಕೇ ಇದು 10 ರ ಜತೆ 11 ಅನ್ನಿಸಿಕೊಳ್ಳದೇ ಸರಾಗವಾಗಿ ನೋಡಿಸಿಕೊಂಡು ಹೋಗತ್ತೆ. ಇಲ್ಲಿ ಹುಡುಗ ಹುಡುಗಿ ಇಬ್ಬರೂ ಬಡತನದಿಂದ ಬಂದವರು, ಅದು ಹೇಗೋ ಪರಿಚಯವಾಗುತ್ತಾರೆ, ಪ್ರೀತಿ ಆರಂಭವಾಗುತ್ತೆ…. ಬೇರೆ ಬೇರೆ ಸನ್ನಿವೇಷಗಳಿಂದಾಗಿ ಅದು ಬೆಳೆಯುತ್ತೆ. ಇದರ ಮಧ್ಯೆ ಇನ್ನೊಬ್ಬ ಶ್ರೀಮಂತ ಹುಡುಗನ ಪ್ರವೇಶದಿಂದಾಗಿ ಕಥೆ ಅನಿರೀಕ್ಷಿತ ತಿರುವು ಪಡೆಯುತ್ತೆ!!!! ಅಲ್ಲಿಗೆ ಅದು ತ್ರಿಕೊನ ಪ್ರೇಮಕಥೆ ಅಂತ ಜನ ಅಂದ್ಕೊಳ್ಳೋ time ಗೆ ಶಶಾಂಕ ಕಥೆಗೆ ಬೇರೇನೇ ಆಯಾಮ ಕೊಡ್ತಾರೆ. ಒಟ್ನಲ್ಲಿ ಪ್ರೇಕ್ಷಕ ಮುಂದೇನಾಗುತ್ತೆ ಅಂತ ಅಂದ್ಕೋತಾನೋ ಅದು ಆಗಲ್ಲ… ಆದ್ರೆ ಅಲ್ಲೇನು ಆಗತ್ತಲ್ಲ ಅದು ಸರಿಯಾಗೆ ಇದೆ ಅಂತ ನೀವು ಒಪ್ಕೊಳ್ಳೋ ಥರಾ ಸಿನಿಮಾನಾ ಮಾಡಿರೋದು ನಿರ್ದೇಶಕರ ಬುದ್ಧಿವಂತಿಕೆಗೆ ಸಾಕ್ಷಿ!!!!

ಸಂತೆಯಲ್ಲಿ ನಿಂತರೂನೂ.......


ಇಲ್ಲಿ ಉಳಿದೆಲ್ಲಾ ಪಾತ್ರಗಳಿಗಿಂತ ನಿಮಗೆ ನೆನಪಲ್ಲಿ ಉಳಿಯೋದು ಅಂದ್ರೆ ರಾಧಿಕಾ ಪಂಡಿತ್… ಅವಳು ಇಲ್ಲಿ ನಟಿಸಿದ್ದಾಳೆ ಅನ್ನೋಕಿಂತ ಆ ಪಾತ್ರಾನೇ (ಗೀತಾ) ಆಗಿದ್ದಾಳೆ ಅನ್ನೋದೇ ವಾಸಿ…. ಹೇಳ್ಬೇಕಂದ್ರೆ ಸದ್ಯಕ್ಕೆ ಕನ್ನಡದಲ್ಲಿ ಯಾವ ನಾಯಕೀನೂ ಈ ಥರ involve ಆಗಿ ಒಂದು ಪಾತ್ರ ಮಾಡಿರೋದು ನನಗಂತೂ ಗೊತ್ತಿಲ್ಲ!!! ಆದರೆ ಬಾಕಿ ಉಳಿದ ಪಾತ್ರಗಳ ಬಗ್ಗೆ ಇದೇ ಮಾತನ್ನ ಹೇಳಕ್ಕಾಗಲ್ಲ. ಅಜಯ್ ಅಂತೂ ನಟನೆಯೇ ಬರದವರ ಥರಾ ನಟಿಸಿರೋದು ಇದರ ಮೈನಸ್ ಪಾಯಿಂಟ್. ಅವರು ಇನ್ನೂ ಬಹಳಷ್ಟು ಪಳಗಬೇಕು… ಇದರಿಂದಾಗೇ ಇಂಥಾ ಒಳ್ಳೇ ಸಿನಿಮಾ ಕೂಡಾ ನಿಮ್ಗೆ ಸ್ವಲ್ಪ ಬೋರ್ ಹೊಡ್ಸತ್ತೆ ಅಂದ್ರೂ ತಪ್ಪಲ್ಲ!!! ಇನ್ನು ಉಳಿದ ಪಾತ್ರಗಳು ಯಾವುದೂ ನೆನಪಲ್ಲಿ ಉಳಿಯೋ ಸಾಧ್ಯತೆ ಕಡಿಮೆ, ಅದಕ್ಕೆ ಅವಕಾಶಾನೂ ನಿರ್ದೆಶಕರು ಕೊಟ್ಟಿಲ್ಲ ಬಿಡಿ.

ಒಟ್ನಲ್ಲಿ ಈ ಸಿನಿಮಾದಲ್ಲಿ ಶಶಾಂಕ್ ಮತ್ತೊಮ್ಮೆ ಕೆಳಮಧ್ಯಮ/ಮಧ್ಯಮ ವರ್ಗದ ಹುಡುಗಿಯರ ಬಾವನೆಗೆಳ ಬಗ್ಗೆ ಹೇಳಿದ್ದಾರೆ.. ಈ ಸಮಾಜದಲ್ಲಿ ಒಬ್ಬಳು ಹುಡುಗಿ ಬದುಕಲು ಪಡಬೇಕಾದ ಕಷ್ಟಗಳನ್ನ ಬಿಚ್ಚಿಟ್ಟಿದ್ದಾರೆ, ಅವಳು ಯಾವ ಥರಾ ಪರಿಸ್ಥಿತಿಯ ಕೈಗೊಂಬೆಯಾಗುತ್ತಾಳೆ… ಯಾವ ಥರಾ ತನ್ನ ಭಾವನೆಗಳನ್ನ ಮುಚ್ಚಿಟ್ಟು ಬದುಕುತ್ತಾಳೆ… ಒಟ್ನಲ್ಲಿ ಎಲ್ಲಾ ಅಂದ್ರೆ ಎಲ್ಲಾನೂ ಹೇಳಿದ್ದಾರೆ… ರಾಧಿಕಾ ಅದಕ್ಕೆ ಜೀವ ತುಂಬಿದ್ದಾರೆ.

ಕ್ಲೈಮಾಕ್ಸ್ ತನ್ಕ ಬರೀ ಕಥೆಯಾಗಿದ್ದ ಸಿನಿಮಾ ಅಲ್ಲಿ ಜೀವನಾನೆ ಆಗ್ಬಿಡತ್ತೆ!!! ಯಾರೂ ಊಹಿಸಕ್ಕು ಅಗದೇ ಇರೋ ಥರಾ ತಿರುವು ಪಡ್ಕೊಳ್ಳತ್ತೆ… ಅಲ್ಲಿಗೆ ನಿಮ್ಗೆ ಒಂದು ಒಳ್ಳೇ Movie ನೋಡಿದಂತಾ ಭಾವನೆ/ಸಂತೋಷದ ಜತೆಗೆ ಹೊರಗೆ ಬರಕ್ಕೆ ಕೂಡಾ ಆಗತ್ತೆ. ನೀವು ಕೊಟ್ಟಿರೋ ದುಡ್ಡಿಗೆ ಈ ಸಿನಿಮಾ ಖಂಡಿತಾ ಮೋಸ ಮಾಡಲ್ಲ!!! ಇನ್ನು ಇದರಲ್ಲಿ ಕೊರಿಯೋಗ್ರಾಫಿ ಇರಬಹುದು, ಚಿತ್ರೀಕರಣ ಇರ್ಬೋದು ಎಲ್ಲಾನೂ ಅಚ್ಚುಕಟ್ಟು. ಅದಕ್ಕೇ ಚಿತ್ರದ ಪ್ರತೀ ಫ್ರೇಮು ಕೂಡಾ ಒಂದು ಚಿತ್ತಾರ. ಕಿವಿಗಿಂಪಾದ ಸಂಗೀತ… ಕಣ್ಣಿಗಿಂಪಾದ ಚಿತ್ರೀಕರಣ!!! ಒಂದೆರಡು ಹಾಡುಗಳು ಚಿತ್ರಮಂದಿರದಿಂದ ಹೊರಗಡೆ ಬಂದಮೇಲೂ ನೆನಪಲ್ಲಿ ಉಳಿಯತ್ತೆ ಅದಕ್ಕೆ ಕಾರಣ ಸಂಗೀತ ನಿರ್ದೇಶಕ ಶ್ರೀಧರ್…

ಜೀವಗಳ ಭಾಷೆ ಇದು ಬೇಕೆ ಅನುವಾದ????


ಒಟ್ಟಿನಲ್ಲಿ ಒಮ್ಮೆ ನೋಡಲೇ ಬೇಕಾದ ಚಿತ್ರ ಅಂತಂದ್ರೆ ಖಂಡಿತಾ ತಪ್ಪಲ್ಲ.. ಸಮಯ ದುಡ್ಡು ಇದ್ದು ಮನರಂಜನೆ/ಫೀಲಿಂಗು ಬೇಕಂದ್ರೆ ಮಿಸ್ ಮಾಡ್ಕೊಳ್ದೇ ಈ LOVE STORY ನಾ ನೋಡಿ..
ಹೃದಯವೇ ಬಯಸಿದೆ ನಿನ್ನನೆ
ತೆರೆಯುತ ಕನಸಿನ ಕಣ್ಣನೆ
ದಿನವಿಡೀ ನಿನ್ನಯೆ ನೆನಪಲೆ ನೆನೆಯುವೆ
ಸಳತಕೇ ಸೋಲುತ ಸನಿಹಕೆ ಕಾಯುವೆ…
ಅಂತ ಗುನುಗುತ್ತಾ ನೀವು ಹೊರ್ಗಡೆ ಬರ್ತೀರಾ ಅಂತನ್ನೋದು ಶಶಾಂಕ್ ಮಾತ್ರ ಅಲ್ಲ ನನ್ನ ನಂಬಿಕೆ ಕೂಡಾ….

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ