ಶಂಕರನಾಗ್ ಕರ್ನಾಟಕದ ಯಾವುದೋ ಒಂದು ಹಳ್ಳಿಯಲ್ಲಿ ಹುಟ್ಟಿ,(ಹೊನ್ನಾವರದ ಮಲ್ಲಾಪುರ) ಕಷ್ಟ ಪಟ್ಟು ಮೇಲೆ ಬಂದವರು… ಕನ್ನಡ ಚಿತ್ರರಂಗದಲ್ಲಿ ಬಹಳಸ್ಟು ಬದಲಾವಣೆಗಳನ್ನು ತರಲು ಪ್ರಯತ್ನ ಪಟ್ಟವರು… (ಇದಕ್ಕೆ ಸಾಕ್ಷಿ ಅವರ “ಇದು ಸಾಧ್ಯ” ಸಿನಿಮಾ).ಆದರೆ ಯಾಕೋ ವಿಧಿಗೆ ಅವರ ಏಳಿಗೆ ಸಹಿಸೋಕೆ ಆಗಿಲ್ಲ ಅನ್ಸುತ್ತೆ!!! ಸಿನಿಮಾ ದ ಜಪ ಮಾಡ್ತಾನೆ ವಾಹನ ಆಕ್ಸಿಡೆಂಟ್ ನಲ್ಲಿ ಅಪಾರ ಅಭಿಮಾನಿಗಳನ್ನ ಬಿಟ್ಟು ಹೋಗೆ ಬಿಟ್ರು….
ಇಸ್ಟೆಲ್ಲಾ ಪೀಠಿಕೆ ಕೊಟ್ಟು ಸುಮ್ನೆ ಬಿಡಕ್ಕಾಗಲ್ಲ… ಅದ್ಕೆ ನಂಗೆ ತುಂಬಾ ಇಷ್ಟ ಆಗಿರೋ ಅವ್ರ ಸಿನಿಮಾದ ಒಂದು ಗೀತೆಯ ಸಾಹಿತ್ಯನ ನಿಮಗೋಸ್ಕರ ಇಲ್ಲಿ ಕೊಡ್ತೀನಿ…
ಯಾವ್ದು ಅಂತಾನ??? ಹೇಳಿ ಕೇಳಿ ಒಬ್ಬ ಯುವಕ ಅವ್ರ ಇನ್ಯಾವ ಗೀತೆನ ಇಷ್ಟ ಪಡ್ಬೋದು ಹೇಳಿ?? ಹೌದು.. ನೀವು ಅಂದ್ಕೊಂಡಿರೋದು ಸರಿ.. ಅದು ೧೯೮೧ ರಲ್ಲಿ ಬಂದ (ನಾನು ಹುಟ್ಟಿದ ವರ್ಷ ಅದು ಅನ್ನೋದು ಬೇರೆ ವಿಷ್ಯ) “ಗೀತ” ಸಿನಿಮದ, ಹುಚ್ಚು ಹಿಡಿಸೋ ಹಾಡು.. “ಕೇಳದೆ ನಿಮಗೀಗ …” ಇದನ್ನ ಬರ್ದಿರೋದು ಚಿ.ಉದಯಶಂಕರ್… ಹಾಗೆ ಮನದಲ್ಲೇ ಗುನುಗುನಿಸುತ್ತ ಓದಿ ಆನಂದಿಸಿ…
ಕೇಳದೆ ನಿಮಗೀಗ ದೂರದಲ್ಲಿ ಯಾರೋ…
ಹಾಡು ಹೇಳಿದಂತೆ ಒಂದು ಹೆಣ್ಣಿನ ..
ಓ ಓ ಓ ಒಂದು ನೊಂದ ವಿರಹ ಗೀತೆ
ಕೇಳದೆ ನಿಮಗೀಗ ದೂರದಲ್ಲಿ ಯಾರೋ…
ಸಂಪಿಗೆ ಒಂದೂರು ಮಲ್ಲಿಗೆ ಒಂದೂರು
ನಡುವಲ್ಲಿ ನದಿಯೊಂದು . …
ಹಗ್ಗದ ಉಯ್ಯಾಲೆ ತೂಗುವ ಹಾಗೊಂದು ಸೇತುವೆಯೂ ಅಲ್ಲೊಂದು ..
ಈ ಊರ ಚೆಲುವೆ ಆ ಊರ ಚೆಲುವ
ನದಿ ಅಂಚಲಿ ಓಡಾಡುತ ಎದುರಾದರು ಒಮ್ಮೆ …
ಕೇಳದೆ ನಿಮಗೀಗ ದೂರದಲ್ಲಿ ಯಾರೋ…
ಚೆಲುವೆಯ ಕಂಡಾಗ ಚೆಲುವನ ಮನದಲ್ಲಿ ನೂರಾಸೆ ಬಂದಾಗ
ಚೆಲುವೆಯ ಕಣ್ಣಲಿ ಚೆಲುವನು ಮನೆಮಾಡಿ ಶಿಲೆಯಂತೆ ನಿಂತಾಗ
ಹೂವಾಗಿ ಮನಸು ನೂರಾರು ಕನಸು ಬೆರಗಾದರು ಒಳವಿಂದಲಿ
ಒಂದಾದರು ಆಗ ……..
ಕೇಳದೆ ನಿಮಗೀಗ ದೂರದಲ್ಲಿ ಯಾರೋ…
ಈ ಊರಿನ ಜನಕ್ಕೂ ಆ ಊರಿನ ಜನಕ್ಕೂ
ಹಿಂದಿನಿಂದ ದ್ವೇಷ ಒಬ್ಬರನೊಬ್ಬರು ಕೊಲ್ಲುವಷ್ಟು ಆಕ್ರೋಶ
ಹೀಗಿದ್ದರು ಆ ಪ್ರೇಮಿಗಳು ಹೆದರಲಿಲ್ಲ
ದಿನ ರಾತ್ರಿ ಊರೆಲ್ಲ ಮಲಗಿದಮೇಲೆ ಹಗ್ಗದ ಸೇತುವೆ ಮೇಲೆ ಇಬ್ಬರು ಸೇರ್ತಿದ್ರು
ಚೆಲುವೆಯ ಮಾವಯ್ಯ ಒಲವಿನ ಕತೆ ಕೇಳಿ
ಹುಲಿಯಂತೆ ಎಗರಾಡಿ …
ಸೇತುವೆಯ ಬಳಿ ಬಂದಾಗ ಪ್ರೇಮಿಗಳ ಕಂಡಾಗ
ರೋಷದಲಿ ಕೂಗಾಡಿ …. ಹಲ್ಲನ್ನು ಮಸೆದ ಸೇತುವೆಯ ಕಡಿದ ….
ಆ ಜೋಡಿಯ ಕತೆ ಅಂದಿಗೆ ಕೊನೆಯಾಯಿತು ಹೀಗೆ
ಕೇಳದೆ ನಿಮಗೀಗ ದೂರದಲ್ಲಿ ಯಾರೋ…
ಲ ಲ ಲ ಲ ಲ ಲ ಲಾ ಲಾ ಲಾ …ಓ ಓ ಓ ಓ ..ಲ ಲ ಲ ಲ ಲ ಲಾ ಲಾ ಲಾ
ಅಯ್ಯೋ * ಮಾರ್ಕ್ ಹಾಕೋದನ್ನ ಮರ್ತೇ ಬಿಟ್ಟಿದ್ದೆ…!!!! ಹೌದು.. ಇದನ್ನ ಓದ್ತಾ ಅನುಭವಿಸಿದಾಗ ನಿಮ್ಮ ಹಾರ್ಟ್ಗೆ ಆಗೋ ಯಾವುದೇ ತೊಂದರೆಗಳಿಗೆ ನಾನು ಜವಾಬ್ದಾರನಲ್ಲ!!!!
ಮುಂದಿನ ಸಲ ಸಿಗೋವರ್ಗೂ namskara…
ನಿಮ್ಮವ,
ಕೇಶವ ಪ್ರಸಾದ್ ಮಾರ್ಗ
ನಿಮ್ಮ ಅನಿಸಿಕೆಗಳು