ಸಿಹಿ ಮಾತು

ಇದು ಮನಸುಗಳ ಮಾತು

ಒಮ್ಮೊಮ್ಮೆ ಹಾಗಾಗುತ್ತೆ…. (2ನೇ ಮುತ್ತು) ಡಿಸೆಂಬರ್ 25, 2009

Filed under: ಝೆನ್ ಕಥಾ ಕೋಶ... — Keshava Prasad M @ 4:46 ಅಪರಾಹ್ನ
Tags: , , ,


ಒಬ್ಬ ಶಿಷ್ಯ ಗುರುವಿನ ಬಳಿ ಹೋಗಿ
“ಗುರುಗಳೇ ನನ್ನಿಂದ ಏಕಾಗ್ರತೆಯನ್ನು ಸಾಧಿಸಲಾಗುತ್ತಿಲ್ಲ ; ಧ್ಯಾನ ಮಾಡಲಾಗುತ್ತಿಲ್ಲ ; ಸಾಧನೆ ಮಾಡಲು ನನ್ನಲ್ಲಿ ಯೋಗ್ಯತೆ ಇಲ್ಲವೇನೋ ಅನಿಸುತ್ತಿದೆ. ಬಹಳ ನಿರಾಶೆಯಾಗಿದೆ” ಎಂದು ಹೇಳುತ್ತಾನೆ.
ಆಗ ಗುರು” ಚಿಂತಿಸಬೇಡ , ಒಮ್ಮೊಮ್ಮೆ ಹಾಗನಿಸುವದುಂಟು , ಅದಕ್ಕೆಲ್ಲ ಗಮನ ಕೊಡಬೇಡ” ಎನ್ನುತ್ತಾನೆ

ಸ್ವಲ್ಪ ದಿನಗಳ ನಂತರ ಶಿಷ್ಯನು ಮತ್ತೆ ಗುರುವಿನ ಬಳಿ ಹೋಗಿ
“ಗುರುಗಳೆ , ನನ್ನ ಧ್ಯಾನ ಯಶಸ್ವಿಯಾಗಿದೆ, ಸಾಧನೆ ಅದ್ಭುತವಾಗಿದೆ, ಜ್ಞಾನ ನನಗೆ ಲಭಿಸಿದೆ ಅನ್ನಿಸುತ್ತಿದೆ” ಎಂದು ಹೇಳುತ್ತಾನೆ .
ಆಗ ಗುರುವು” ಚಿಂತಿಸಬೇಡ , ಒಮ್ಮೊಮ್ಮೆ ಹಾಗನಿಸುವದುಂಟು , ಅದಕ್ಕೆಲ್ಲ ಗಮನ ಕೊಡಬೇಡ” ಎನ್ನುತ್ತಾನೆ!!!!

(ಯಾವತ್ತೂ ಹಾಗೆ… ಸಾಧಕನಿಗೆ ಯಾವೂದೂ ಅತೀ ಅಂತನಿಸಬಾರದು…. ಯಾವತ್ತು ನೀವು ನಿಮ್ಮ ಗುರಿ ಮುಟ್ಟಿದ್ದೀರಿ ಅಂತ ಅಂದು ಕೊಳ್ಳುತ್ತೀರೋ ಅವತ್ತಿಗೆ ನಿಮ್ಮ ಬೆಳವಣಿಗೆಯ ಅವನತಿ ಆರಂಭವಾಗುತ್ತದೆ)

 

2 Responses to “ಒಮ್ಮೊಮ್ಮೆ ಹಾಗಾಗುತ್ತೆ…. (2ನೇ ಮುತ್ತು)”


ನಿಮ್ಮ ಟಿಪ್ಪಣಿ ಬರೆಯಿರಿ